ಏನಾದರೇನು? ಹೇಗಾದರೇನು?
ಜಡತನವು ದೂರಾಗಬೇಕು
ಸಿರಿಬಂದರೇನು? ಸಿರಿ ಹೋದರೇನು?
ಸತ್ಯತೆಯು ನೆಲೆಯಾಗಬೇಕು.
ನಿಂದ್ಯಾಭಿನಂದನೆಯ ಗೊಡವೆ ಬೇಡ ,
ಒಂದೇ ಮಾತಿನಲ್ಲಿ ದ್ವಂದ್ವಾರ್ಥ ಬರದಂತೆ
ಎಂದೆಂದಿಗೂ ನೀನು ಚುರುಕಾಗಿರು
ಹೆಮ್ಮೆಯಲಿ ಮೆರೆಯುವುದು ಸರಿಯಲ್ಲ,
ಒಮ್ಮತ ಸೌಹಾರ್ದ ಅಂಕುರಿಸಲೆಂದು
ನಡೆದಂತೆ ನುಡಿಬೇಕು ಸವಿಸೊಲ್ಲ.
ರಚನೆ :
ಕೆ. ಸಿ. ಚಂದ್ರಶೇಖರ್
(ಕುದುರೇರ ಚೆನ್ನಬಸಪ್ಪ ಚಂದ್ರಶೇಖರ್)
ಕೊಡ್ಲಿಪೇಟೆ , ಕೊಡಗು ಜಿಲ್ಲೆ , ಕರ್ನಾಟಕ, ಭಾರತ
ಜಡತನವು ದೂರಾಗಬೇಕು
ಸಿರಿಬಂದರೇನು? ಸಿರಿ ಹೋದರೇನು?
ಸತ್ಯತೆಯು ನೆಲೆಯಾಗಬೇಕು.
ಇಡು ಹೆಜ್ಜೆ ಮುಂದೆ, ಬರಬೇಡ ಹಿಂದೆ
ಎಡವುತ್ತ , ಬೀಳುತ್ತ , ಬಳಲುತ್ತ ಮುಂದೆ,
ಜಡವನ್ನು ಕಳೆದು, ಚೇತನವ ಪಡೆದು
ಎಡರುಗಳನ್ನೆಲ್ಲಾ ಬದಿದೋಡಿಸು.
ನಿಂದ್ಯಾಭಿನಂದನೆಯ ಗೊಡವೆ ಬೇಡ ,
ಒಂದೇ ಮಾತಿನಲ್ಲಿ ದ್ವಂದ್ವಾರ್ಥ ಬರದಂತೆ
ಎಂದೆಂದಿಗೂ ನೀನು ಚುರುಕಾಗಿರು
ಸುಖ ದುಃಖವೆರಡೂ, ಒಂದಾಗಿ ಹೆಣೆದು ,
ಮುಖವಬಾಡಿಸುವವು ಅತಿಯಾಗಿ
ಸಖ ನೀನು ಮಾತ್ರ ಕೆಚ್ಚನ್ನು ತಳೆದು,
ಸುಖ ದುಃಖಗಳ ಸಹಿಸು ಸ್ಥಿರನಾಗಿ.
ಹೆಮ್ಮೆಯಲಿ ಮೆರೆಯುವುದು ಸರಿಯಲ್ಲ,
ಒಮ್ಮತ ಸೌಹಾರ್ದ ಅಂಕುರಿಸಲೆಂದು
ನಡೆದಂತೆ ನುಡಿಬೇಕು ಸವಿಸೊಲ್ಲ.
ಅಂತರಂಗದ ಬಯಕೆ ಚಿಂತೆಗಳ ಪರಿಹಾರ,
ಶಾಂತ ರೀತಿಯಲಿ ಕೈಗೂಡಬೇಕು.
ಜಂತು ಜೀವಿಗಳ ಧ್ಯೇಯದ ಸಾಕ್ಷಾತ್ಕಾರ
ಸಂತರ ತಪದಂತೆ ಸಿದ್ದಿಸಬೇಕು.
ರಚನೆ :
ಕೆ. ಸಿ. ಚಂದ್ರಶೇಖರ್
(ಕುದುರೇರ ಚೆನ್ನಬಸಪ್ಪ ಚಂದ್ರಶೇಖರ್)
ಕೊಡ್ಲಿಪೇಟೆ , ಕೊಡಗು ಜಿಲ್ಲೆ , ಕರ್ನಾಟಕ, ಭಾರತ
Nice.
ReplyDelete