Sunday, August 29, 2010

ಲಾವಣಿ ಮುಂದುವರಿದುದು.. ಭಾಗ 2

ಮಾನಸ ಪೂಜೆಯ ಮಾಡುತಲಿದ್ದರು ಸೋದೇಮಠದಲಿ ಸ್ವಾಮಿಗಳು |
ಕಲ್ಪತ ಮಾಲೆಯು ಕಲ್ಪಕಿರೀಟದಿ ತೂರದೆ ಇದ್ದರು ವ್ಯಸನದೊಳು||೨೩||

ವಾದಿರಾಜರ ಕಷ್ಟವ ತಿಳಿದನು ಕನಕನು ದಿವ್ಯ ಜ್ಞಾನದಲಿ |
ಬೇರೆ ಕಿರೀಟವ ಮಾಡಿರಿ ಎಂದು ಹೇಳಿ ಕಳಿಸಿದನು ವಿನಯದಲಿ ||೨೪||

ಕನಕದಾಸನಮಹಾತ್ಮ್ಯ ತಿಳಿದು ಗುರುಗಳಿಗಾಯಿತು ಆಶ್ಚರ್ಯ |
ಕೃಷ್ಣನ ದರ್ಶನ ಮಾಡಿಸು ಎಂದು ಗಂಟುಬಿದ್ದರು ಗುರುವರ್ಯ ||೨೫||

ಡೊಂಕುಬಾಲದ ನಾಯಕರೇ ನೀವೇನೂಟವ ಮಾಡಿದಿರಿ?
ಎನ್ನುತ ಕನಕನು ಕೇಳಲು ನಾಯಿಯು ನುಡಿಯಿತು ನಡೆದುದ ಬರಾಬರಿ ||೨೬||

ನಾಯಿರೂಪದ ನಾರಾಯಣನನು ಕಾಣದೆ ಹೋದರು ಸ್ವಾಮಿಗಳು |
ಮಾಯಾಲೀಲೆಯ ನೋಡಲು ಆಗ ನೆನೆದರು ಚಿತ್ತ ಶುದ್ದಿಯೊಳು ||೨೭||

ನೆಲದಮೇಲೆ ಹಿಂಗಾಲನು ಇಟ್ಟು ಗುರುಗಳ ಹೆಗಲಲಿ ಮುಂಗಾಲಿಟ್ಟು
ಹಯರೂಪದಿ ಹರಿ ದರ್ಶನ ವಿಟ್ಟನು ಕನಕನ ಧ್ಯಾನಕೆ ಓ ಗೊಟ್ಟು ||೨೮||

ಮುಕ್ತಿಗೆ ಸಾಧನ ಯಾವುದು ಎಂದು ವ್ಯಾಸರಾಯರು ಕೇಳಿದರು|
ಶಕ್ತಿಯು ಅದಕೆ 'ನಾ-ಸತ್ತರೆ' ಎಂದು ಕನಕರು ಹೇಳಿದರು ||೨೯||

ಕನಕನ ಮಾತನು ಕೇಳಿದ ಶಿಷ್ಯರು ನಕ್ಕರು ತಾವು ಘೊಳ್ಳೆಂದು|
'ನಾ' ಎಂದರೆ ಗರ್ವವು ಎನ್ನಲು ಗುರುಗಳು ನುಡಿದರು 'ಸೈ' ಎಂದು ||೩೦ ||

ಪೆಚ್ಚು ಬಿದ್ದರು ನಕ್ಕ ಶಿಷ್ಯರು ಕನಕನ ಅರ್ಥವ ಕೇಳುತಲಿ |
ಹುಚ್ಚು ಮಾತನು ಬಿಚ್ಚಿ ಓಡಿಸಿ ಎಂದನು ಅವರಿಗೆ ವಿನಯದಲಿ ||೩೧ ||

ತಿಂಮ,ಕನಕ,ಕನಕನಾಯಕ,ಕನಕದಾಸನ ರೂಪದಲಿ |
ದೇವನ ಕಂಡು,ದೇವನ ತೋರಿಸಿ,ಅಮರನಾದನು ಭುವಿಯಲ್ಲಿ ||೩೨ ||

ಚಿತ್ತ ಭಿತ್ತಿಯಲಿ ಭಕ್ತಿಯ ಬೀಜವ ಕನಕದಾಸನು ಬಿತ್ತಿದನು |
ತೊಂಭತ್ತೆಂಟು ವರ್ಷ ತಾ ಬಾಳಿ,ತನ್ನಯ ಅಸುವನು ನೀಗಿದನು ||೩೩||

ಮೋಹ(ನ) ತರಂಗಿಣಿ ನಳ ಚರಿತ್ರೆ ಹರಿ ಭಕ್ತಿ(ಯ) ಸಾರಗಳು |
ರಾಮಧಾನ್ಯ ಚರಿತ್ರೆಗಳೆಲ್ಲಾ ಕನಕದಾಸನ ಗ್ರಂಥಗಳು ||೩೪||

ಓದಿರಿ ಕನ್ನಡ ನಾಡಿನ ಜನರೇ ಕನಕ ಗ್ರಂಥವ ಭಕ್ತಿಯಲಿ
ಮಾಡಿರಿ ಕೇಶವರಾಯನ ಧ್ಯಾನವ ಪಡೆಯಿರಿ ಮುಕ್ತಿಯ ಪರದಲ್ಲಿ ||೩೫||


ರಚನೆ : ಕೆ. ಸಿ. ಚಂದ್ರಶೇಖರ್
ಕೊಡ್ಲಿಪೇಟೆ

Tuesday, August 17, 2010

ಲಾವಣಿ

೧೪--೧೯೬೫ ಕನಕ ಜಯಂತಿಗೋಸ್ಕರ ಬರೆದ ಲಾವಣಿ.
ರಚನೆ : ಕೆ ಸಿ ಚಂದ್ರಶೇಖರ್ ಕೊಡ್ಲಿಪೇಟೆ

ಕನ್ನಡ ನಾಡಿನ ಕನ್ನಡ ಜನರೇ ಕೇಳಿರಿ ನೀವು ಒಲವಿಂದ |
ಕನಕದಾಸರ ಕಥೆಯನು ಪೇಳುವೆ ಆಲಿಸಿ ನೀವು ಮುದದಿಂದ ||ಪ||

ಧಾರವಾಡದ ಕೋಡ ತಾಲೂಕಿನ ಬಾಡ ಎಂಬುವ ಊರಲ್ಲಿ |
ಹರಿಯಪವಾಡವ ತಿಳಿಸಲು ಹುಟ್ಟಿದ ಕನಕ ಕುರುಬರ ಕುಲದಲ್ಲಿ ||೧||

ತಂದೆಯನಾಮವು ಬೀರೇಗೌಡ ಮಾಡುತಲಿದ್ದನು ಗೌಡಿಕೆಯ |
ಒಂದೇ ಮನದಲಿ ನೆನೆಯುತಲಿದ್ದನು, ತಿರುಪತಿದೇವನ ಪದದಡಿಯ ||೨||

ಮಡದಿ ಬಚ್ಚಿಯ ಪ್ರಾಯಸಂದರೂ ಕಂದನ ಭಾಗ್ಯವು ಇಲ್ಲವಾಯ್ತು |
ಒಡನೆ ಗೌಡನ ದೇವರ ಧ್ಯಾನವು ತಿರುಪತಿಯಲ್ಲಿ ಜೋರಾಯ್ತು ||೩||

ವೆಂಕಟರಮಣನು ಬ್ರಾಹ್ಮಣ ರೂಪದಿ ಬಂದನು ಗೌಡನ ಕನಸಿನಲ್ಲಿ |
ಉಂಡೆ ಪ್ರಸಾದವ ಕೊಟ್ಟಂತಾಯಿತು ಹರುಷವು ತುಂಬಿತು ಮನದಲ್ಲಿ ||೪||

ಹುಟ್ಟಿದ ಕುವರನು ಬಚ್ಚಿಯ ಉದರದಿ ಹದಿನಾರನೆಯ ಶಕದಲ್ಲಿ |
ಇಟ್ಟರು ತಿಂಮ ಎಂಬುವ ನಾಮವ ವೆಂಕರಮಣನ ನೆನಹಲ್ಲಿ ||೫||

ಬೆಳೆದನು ತಿಂಮನು ಭಗವನ್ನಾಮ ಭಗವದ್ಭಕ್ತರ ನೇಹದಲಿ |
ಅಳಿದನು ಆತನ ಒಲವಿನ ಪಿತನು ಆತನ ಆರನೆ ವಯಸಿನಲಿ ||೬||

ತನಗೆ ಸಿಕ್ಕಿದ ನಿಕ್ಷೇಪವನು ತಿಂಮನು ದಾನವ ಮಾಡಾಯ್ತು |
ದೀನ ದಲಿತರ ಜಿಹ್ವೆಲಿ ಅವಗೆ ಕನಕನೆಂಬುವ ಹೆಸರಾಯ್ತು||೭||

ಇಂತು ತಿಂಮನು ಕನಕನಾದನು ಸಂತನಾಗುವಯೋಗದಲಿ|
ಸಂತಸದಿಂದಲಿ ಆತನ ಧ್ಯಾನವು ಹರಿಯಿತು ರಮಣನ ಚರಣದಲಿ ||೮||

ಕನಕನ ಪರಹಿತ ನಿಷ್ಥೆಯಿಂದಲಿ , ದೇವನಾದನು ಸಂತುಷ್ಟ |
ದಿನದಿಂ ದಿನಕೆ ಜ್ಞಾನ ಪೌರುಷ ಹೆಚ್ಚಲು ಆದನು ಉತ್ಕೃಷ್ಟ ||೯ ||

ಹರಕೆ ಹೊತ್ತರು ಕನಕನ ಹೆಸರಲಿ, ಇಷ್ಟಸಿದ್ಧಿಯು ಜನಕಾಯ್ತು |
ತಿರುಪತಿ ಬದಲು ಕಾಣಿಕೆಯೆಲ್ಲವು ಕನಕ ಭಂಡಾರದಿ ಜಮೆಯಾಯ್ತು ||೧೦||


ಕಾಗಿನೆಲೆಯ ಉದ್ಭವ ಮೂರ್ತಿ, ಆದಿಕೇಶವ ಸ್ವಾಮಿಗೆ |
ಮಂಟಪ ಕಟ್ಟಿಸಿ ಉತ್ಸವ ಮಾಡಿದ ಕನಕನುದಿವ್ಯ ಮೂರ್ತಿಗೆ ||೧೧||

ಏಕನಿಷ್ಠೆಯಿಂ ದ್ವಾದಶ ವರ್ಷ, ಸಾಗಿತು ಆತನ ಉಪಾಸನೆ |
ಇಂತಿರಲೊಮ್ಮೆ ಸ್ವಪ್ನದಿ ಆಯಿತು ರಮಣನ ಸೇವೆಗೆ ಅಹವಾನೆ ||೧೨||

ಕೇಶವದೇವನ ನಿಷ್ಠೆಯ ತೊರೆಯಲು ಕನಕನ ಮನಕೆ ಕಹಿಯಾಯ್ತು |
ವೆಂಕಟ ರಮಣನ ಸೇವೆಯ ಮಾಡದೆ ಹೊಟ್ಟೆಯ ಶೂಲೆಯು ಜೋರಾಯ್ತು ||೧೩||

ಬಂದೆವಯ್ಯಾ ಗೋವಿಂದಶೆಟ್ಟಿಯೇ ಎಂಬುವ ಹಾಡನು ಹಾಡುತಲಿ |
ವಂದನೆ ಗೈದನು ತಿರುಪತಿಯಲ್ಲಿ ಶೂಲೆಯು ಅಡಗಿತು ಕರುಣೆಯಲಿ ||೧೪||

ಆಗಿನಕಾಲದಿ ದಾಸ ಕೂಟದಲಿ ವ್ಯಾಸರಾಯರೇ ಶಿರೋಮಣಿ |
ಯೋಗಾಭ್ಯಾಸಕೆ ಕನಕನು ಅವರಲಿ ಆದನು ಶಿಷ್ಯರ ಶಿಖಾಮಣಿ ||೧೫||

ಕುರುಬರ ಕನಕನ ಹಿರಿಮೆಯಕಂಡು ಹಿರಿಯ ಶಿಷ್ಯರು ಕರುಬಿದರು |
ವರಗುರು ಅವರಿಗೆ ಪಾಠವ ಕಲಿಸಲು ಒಂದು ಪರೀಕ್ಷೆಯ ನಡೆಸಿದರು ||೧೬||

ಗುರುಗಳು ಕೊಟ್ಟ ಹಣ್ಣನು ತಿಂದರು ಮೂಲೆಮುಡುಕಲಲಿ ಗುಟ್ಟಿನಲಿ|
ಹರಿಯ ಇರವನು ಕಂಡನು ಕನಕನು ತಿನ್ನಲು ಹೋದ ಠಾವಿನಲಿ ||೧೭||

ತಿನ್ನದೆ ಹಣ್ಣನು ಹಿಂದಕೆ ತಂದು ಗುರುಗಳಿಗದನು ಒಪ್ಪಿಸಿದ |
ಚಿನ್ಮಯ ಮೂರ್ತಿಯ ಸರ್ವಸಾಕ್ಷಿತ್ವವ ಎಲ್ಲರ ಮನಕೂ ಮುಟ್ಟಿಸಿದ ||೧೮||

ಹಾಡನು ಕಟ್ಟುತ ಹಾಡನು ಹಾಡುತ ಭಕ್ತಿಯ ಬೀಜವ ಬಿತ್ತಿದನು |
ಬಿಡದೆ ಮಾಡಿರಿ ಒಡೆಯನ ಧ್ಯಾನವ ಎನ್ನುತ ತಾನು ತಿರುಗಿದನು||೧೯||

ಉಡುಪಿ ಕೃಷ್ಣನ ದರ್ಶನಕೆಂದು ನಡೆದನು ಕನಕನು ಪ್ರೀತಿಯಲಿ |
ಮಡಿ ಮಡಿಯೆಂದು ಕಾವಲಿನವರು ಅಟ್ಟಿದರಾತನ ಹಿಂಸೆಯಲಿ ||೨೦||

ದೇವಾಲಯದ ಹಿಂಬದಿಯಲ್ಲಿ ಹಾಡುತ ಕರೆದನು ದೇವನನು |
ದೇವಕಿ ನಂದನು ಪಡುವಕೆ ತಿರುಗಿ ಭಕ್ತಗೆ ದರ್ಶನ ನೀಡಿದನು ||೨೧||

ಕನಕನು ಕೃಷ್ಣನ ಕಂಡ ಕಿಂಡಿಗೆ ಕನಕಕಿಂಡಿಯೆಂಬ್ಹೆಸರಾಯ್ತು |
ಅನುದಿನ ಅವನ ದರ್ಶನ ಭಾಗ್ಯಕೆ ಕನಕ ಕಿಂಡಿಯೇ ಮೊದಲಾಯ್ತು ||೨೨||


ಮುಂದುವರಿಯುವುದು ......

Saturday, August 7, 2010

बढ्नेवाले मुसाफिरों

ओ ओ बढ्नेवाले मुसाफिरों ...... अपने मार्ग से मत फिरो

जैसा बोलो तुम वैसा करो ,
दुनियाँ में नेक दिलवालों

आते हैं राह में टकराते रोडें
भाते हैं पावो में झंझट के झाडें ,
मुस्कातेही तुम उन सबको फाडो,
हिमंत न हारो पीछे मत मोडो ||

पनघट के पोते मरघट के नाते
करते हैं उम्मीद से हमदर्दी बातें
आफ़त में साथी कोई न होते
उल्फ़त के फूलें ठुकराए जातें ||


कवि : के सी चंद्रशेखर
कोड्लीपेट, कोडागु